ಶುಕ್ರವಾರ, ಫೆಬ್ರವರಿ 15, 2019

Study + Steady + Sadhana = SucceSS

ಸಾಧನಾ ಅಕಾಡೆಮಿ,  ಶಿಕಾರಿಪುರ. 9449610920.

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು:

ಪ್ರಶ್ನೋತ್ತರಗಳು:

1) 1761-1799 ರ ನಡುವಿನ ಕಾಲಘಟ್ಟದಲ್ಲಿ ಕರ್ನಾಟಕವನ್ನು ಆಳಿದವರು ಯಾರು?
👉 ಹೈದರಾಲಿ ಮತ್ತು ಅವನ ಮಗ ಟೀಪ್ಪು ಸುಲ್ತಾನರು

2) ಭಾರತದ ಚರಿತ್ರೆಯಲ್ಲಿ ಎಷ್ಟನೇ ಶತಮಾನವನ್ನು ‘ರಾಜಕೀಯ ಸಮಸ್ಯೆಗ¼ ಶತಮಾನ’ ವೆಂದೇ ಚಿತ್ರಿಸಲ್ಪಟ್ಟಿದೆ.
👉 18ನೇ ಶತಮಾನ

3) ಭಾರತದ ಚರಿತ್ರೆಯಲ್ಲಿ 18 ನೇಶತಮಾನ ‘ರಾಜಕೀಯ ಸಮಸ್ಯೆಗಳ ಶತಮಾನ’ ವೆಂದೇ ಚಿತ್ರಿಸಲ್ಪಟ್ಟಿದೆ. ಇದಕ್ಕೆ ಅನೇಕ ಕಾರಣವೇನು?
👉 ಮೊಘಲ್‍ಚಕ್ರವರ್ತಿ ಔರಂಗಜೇಬ್‍ನ ಮರಣ (1707)
👉 ಮೈಸೂರು ರಾಜ್ಯದ ಚಿಕ್ಕದೇವರಾಜ ಒಡೆಯರ ಮರಣ (1704)

4) ಹೈದರಾಲಿಯು ಹೇಗೆ ಅಧಿಕಾರಕ್ಕೆ ಬಂದನು?
👉ಇವನು ಒಬ್ಬ ಸಾಮಾನ್ಯ ಸೈನಿಕನಾಗಿ ಮೈಸೂರು ರಾಜ್ಯದ ಸೇವೆಗೆ ಸೇರಿದ ವ್ಯಕ್ತಿ ತನ್ನ ಚಾಣಾಕ್ಷ ರಾಜಕೀಯ ನಡೆಗೆ ಹೆಸರಾಗಿದ್ದನು.
👉ಮೈಸೂರಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇವನು ದೇವನಹಳ್ಳಿ ಮುತ್ತಿಗೆ ಸಂದರ್ಭ ಮತ್ತು ಅರ್ಕಾಟಿನ ನಿಜಾಮನ ವಿಷಯಕ್ಕೆ ಸಂಬಂಧಿಸಿದ ಸೈನಿಕ ಕಾರ್ಯಾಚರಣೆಯಲ್ಲಿ ಪ್ರವರ್ಧಮಾನಕ್ಕೆ ಬಂದನು.

5) ಮೊದಲನೇ ಆಂಗ್ಲೋ ಮೈಸೂರು ಯುದ್ದವು 1767-69 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
👉 ಮದ್ರಾಸ್ -1769

6) ಎರಡನೇ ಆಂಗ್ಲೋ ಮೈಸೂರು ಯುದ್ದವು 1780- 1784 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
👉 ಮಂಗಳೂರು - 1784

7) ಎರಡನೇ ಆಂಗ್ಲೋ ಮೈಸೂರು ಯುದ್ದ 1780-84 ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
👉 ವಾರನ್ ಹೆಸ್ಟಿಂಗ್ಸ್

8) ಎರಡನೇ ಆಂಗ್ಲೋ ಮೈಸೂರು ಯುದ್ದ 1780-84 ಸಮಯದಲ್ಲಿದ್ದ ಬ್ರಿಟಿಷ್ ಸೇನೆಯ ಸೇನಾನಾಯಕ ಯಾರು?
👉 ಐರ್‍ಕೂಟ್

9) ಯಾವ ಯುದ್ದದ ನಂತರ ಹೈದರಾಲಿ ಮರಣ ಹೊಂದಿದನು?
👉1782 ರಲ್ಲಿ ಪುಲಿಕಾಟ್ ಮತ್ತು ಸೋಲಿಂಗೂರ್‍ಗಳ ಕದನದ ನಂತರ ಮರಣ ಹೊಂದಿದನು.

10) ಮೂರನೇ ಆಂಗ್ಲೋ ಮೈಸೂರು ಯುದ್ದಕ್ಕೆ ಮುಖ್ಯ ಕಾರಣವೇನು?
👉ತಿರುವಾಂಕೂರು ರಾಜ್ಯದ ರಾಜ ನೆರೆಯ ಕೊಚ್ಚಿ ಸಂಸ್ಥಾನದಲ್ಲಿ ಬ್ರಿಟಿಷರ ಬೆಂಬಲದಿಂದ ಕೋಟೆಯನ್ನು ನಿರ್ಮಿಸಿದನು ಮತ್ತು
👉ಆತನು ಡಚ್ಚರಿಂದ ಆಯಕೋಟಾ ಮತ್ತು ಕಾಂಗನೂರು ಕೋಟೆಗಳನ್ನು ಪಡೆದುಕೊಂಡಿದ್ದನು.
👉ಇದು ಮಂಗಳೂರು ಒಪ್ಪಂದದ ಷರತ್ತುಗಳ ಉಲ್ಲಂಘನೆಯಾಗಿತ್ತು.

11) ಮೂರನೆ ಆಂಗ್ಲೋ ಮೈಸೂರು ಯುದ್ದ  ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
👉 ಲಾರ್ಡ ಕಾರನ್‍ವಾಲೀಸ್

12) ಮೂರನೆ ಆಂಗ್ಲೋ ಮೈಸೂರು ಯುದ್ದವು 1790-1792 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
👉ಶ್ರೀರಂಗಪಟ್ಟಣ - 1792

13) ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳೇನು?
👉ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬಿಟ್ಟುಕೊಡುವುದು
👉ಮೂರು ಕೋಟಿ ರೂಪಾಯಿಗಳನ್ನು ಯುದ್ಧನಷ್ಟ ಭರ್ತಿಯಾಗಿ ಕೊಡುವುದು,
👉ಯುದ್ಧನಷ್ಟ ಭರ್ತಿಗೆ ಗ್ಯಾರಂಟಿಯಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ಒತ್ತೆಯಾಗಿ ನೀಡುವುದು,
👉ಯುದ್ಧದ ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದ್ದ ಸೈನಿಕರನ್ನು ಬಿಡುಗಡೆಗೊಳಿಸುವುದು.

14) ನಾಲ್ಕನೆ ಆಂಗ್ಲೋ ಮೈಸೂರು ಯುದ್ದ  ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
👉ಲಾರ್ಡ ವೆಲ್ಲೆಸ್ಲಿ

15) ಟಿಪ್ಪು ಸುಲ್ತಾನ್ ಮರಣ ಹೊಂದಿದ ವರ್ಷ?
👉1799

16) ಟಿಪ್ಪು ಮರಣದ ನಂತರ ಮೈಸೂರನ್ನು ಯಾರಿಗೆ ಹಸ್ತಾಂತರಿಸಲಾಯಿತು?
👉3ನೇ ಕೃಷ್ಣರಾಜ ಒಡೆಯರ್

17) ಕರ್ನಾಟಕದ ಪ್ರಮುಖ ಸಶಸ್ತ್ರ ಬಂಡಾಯಗಳು ಯಾವುವು?
👉ದೋಂಡಿಯಾ ವಾಘ್ (1800)
👉ಕಿತ್ತೂರಿನ ಬಂಡಾಯ - ವೀರರಾಣಿ ಚೆನ್ನಮ್ಮ (1824)
👉ಸಂಗೊಳ್ಳಿ ರಾಯಣ್ಣ  (1829-30)
👉ಅಮರ ಸುಳ್ಯ ಬಂಡಾಯ
👉ಸುರಪುರ ಮತ್ತು ಕೊಪ್ಪಳ ಬಂಡಾಯ
👉ಹಲಗಲಿಯ ಬೇಡರ ದಂಗೆ 

18) ದೋಂಡಿಯಾ ವಾಘ್ ಎಲ್ಲಿ ಜನಿಸಿದನು?

👉ದೋಂಡಿಯಾ ಚನ್ನಗಿರಿಯ ಮರಾಠ ಕುಟುಂಬದಲ್ಲಿ ಜನಿಸಿದನು.

19) ದೋಂಡಿಯಾ ವಾಘ್ ದಂಗೆಯನ್ನು ನಿಯಂತ್ರಸಿದ ಗೌರ್ನರ್ ಜನರಲ್ ಯಾರು?
👉ಲಾರ್ಡ್ ವೆಲ್ಲೆಸ್ಲಿ

20) ದೋಂಡಿಯಾ ವಾಘ್ ಹತ್ಯೆಗೈದ ಸ್ಥಳ?
👉ಕೋನ್‍ಗಲ್

21) ಕಿತ್ತೂರಿನ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಹೋರಾಡಲು ಕಾರಣವೇನು?
👉ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ವಿರೋಧಿಸಿ

22) ಕಿತ್ತೂರಿನ ರಾಣಿ ಚೆನ್ನಮ್ಮ ದತ್ತು ಪಡೆದ ಮಗನ ಹೆಸರೇನು?
👉ಶಿವಲಿಂಗಪ್ಪ

23) ಕಿತ್ತೂರಿನ ಬಂಡಾಯದ ಸಮಯದಲ್ಲಿದ್ದ ಧಾರವಾಡದ ಕಲೆಕ್ಟರ್ ಮತ್ತು ಪೊಲಿಟಿಕಲ್ ಏಜೆಂಟನಾಗಿದ್ದನು ಯಾರು?
👉 ಥ್ಯಾಕರೆ

24) ಕಿತ್ತೂರಿನ ರಾಣಿ ಚೆನ್ನಮ್ಮನನ್ನು ಎಲ್ಲಿ ಬಂಧಿಸಿ ಇಡಲಾಗಿತ್ತು?
👉 ಬೈಲಹೊಂಗಲ ಕೋಟೆ

25) ಕಿತ್ತೂರು ರಾಣಿ ಚೆನ್ನಮ್ಮ__ಎಂಬ ಹುಡುಗನನ್ನು ದತ್ತು ಪಡೆದಿದ್ದಳು.
👉 ಶಿವಲಿಂಗಪ್ಪ

26) ಕಿತ್ತೂರಿಗೆ ಮುತ್ತಿಗೆ ಹಾಕಿದ್ದ ಬ್ರಿಟಿಷ್ ಸೈನ್ಯದ ನಾಯಕ ಅಥವಾ ಲೆಫ್ಟಿನೆಂಟ್ ಯಾರು?
👉 ಲೆಫ್ಟಿನೆಂಟ್ ಕರ್ನಲ್ ಡೀಕ್

27) ಕಿತ್ತೂರಿನ ರಾಜ್ಯಾಡಳಿತದ ವಿಚಾರದಲ್ಲಿ ಥಾಮಸ್ ಮನ್ರೋವಿನ ಪಾತ್ರವೇನು?
👉 ಶಿವಲಿಂಗರುದ್ರಸರ್ಜ ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯವನ್ನು ನೀಡಿದ್ದನು.
👉 ಇದರಿಂದಾಗಿ ಬ್ರಿಟಿಷರು ಆ ಸಂಸ್ಥಾನವನ್ನು ವಂಶಪಾರಂಪರ್ಯವಾಗಿ ಆತನಿಗೆ ನೀಡಿದ್ದು       ಪ್ರತಿಯಾಗಿ ವಾರ್ಷಿಕ ಕಾಣಿಕೆಯನ್ನು ಪಡೆದುಕೊಳ್ಳುವಂತಾಯಿತು.
👉ಈ ಒಪ್ಪಂದ ಥಾಮಸ್ ಮನ್ರೋನ ಕಾಲದಲ್ಲಿ ಜಾರಿಗೊಳಿಸಲ್ಪಟ್ಟಿತು.

28) ಸಂಗೊಳ್ಳಿ ರಾಯಣ್ಣ ಯಾರು?
👉 ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿದ್ದ ವೀರಯೋದ  ಕಿತ್ತೂರು ಸಂಸ್ಥಾನದ ಸೈನಿಕ

29) ರಾಯಣ್ಣನನ್ನು ಬಂಧಿಸಲು ಬ್ರಿಟಿಷರು ರೂಪಿಸಿದ ಸಂಚು ಏನು?

👉 ಕಿತ್ತೂರಿನ ಚೆನ್ನಮ್ಮಳನ್ನು ವಿರೋಧಿಸುತ್ತಿದ್ದ ದೇಸಾಯಿಗಳನ್ನು ಪ್ರಚೋದಿಸಿದರು.
👉 ಅಮಲ್ದಾರನಾಗಿದ್ದ ಕೃಷ್ಣರಾಯ ಎಂಬುವವನು ಈ ಸಂಚಿಗೆ ಕೈ ಜೋಡಿಸಿದನು.
👉 ಸಂಚಿಗೆ ಬಲಿಯಾದ ರಾಯಣ್ಣನನ್ನು ಇಂಗ್ಲಿಷ್ ಸೈನ್ಯ ಬಂಧಿಸಿ ಧಾರವಾಡಕ್ಕೆ ತಂದಿತು.

30) ಸಂಗೊಳ್ಳಿ ರಾಯಣ್ಣನನ್ನು ಎಲ್ಲಿ ಗಲ್ಲಿಗೇರಿಸಲಾಯಿತು?
👉 1831ರಲ್ಲಿ ನಂದಗಡದಲ್ಲಿ ರಾಯಣ್ಣನ್ನು ಗಲ್ಲಿಗೇರಿಸಲಾಯಿತು.

31) ಅಮರ ಸುಳ್ಯ ಬಂಡಾಯ ಇದು ಮೂಲತಃ ಎಂತಹ ಮಾದರಿಯ ಬಂಡಾಯ?

👉 ಇದು ಮೂಲತಃ ರೈತ ಬಂಡಾಯ

32) ಅಮರ ಸುಳ್ಯ ಬಂಡಾಯವನ್ನು ಸಂಘಟಿಸಿದವರು ಯಾರು?
👉 ಕೊಡಗಿನಲ್ಲಿ ಸ್ವಾಮಿಅಪರಾಂಪರ, ಕಲ್ಯಾಣಸ್ವಾಮಿ ಮತ್ತು ಪುಟ್ಟಬಸಪ್ಪ ಸಶಸ್ತ್ರ ಬಂಡಾಯವನ್ನು ಸಂಘಟಿಸಿದರು.

33) ಕೊಡಗನ್ನು ಆಳಿದ ಕೊನೆಯ ಅರಸ ಯಾರು?
👉 ಹಾಲೇರಿ ರಾಜವಂಶದ ಚಿಕ್ಕವೀರರಾಜೇಂದ್ರ

34) ‘ಅಮರ ಸುಳ್ಯ’ ಬಂಡಾಯದ ಕೇಂದ್ರ ಸ್ಥಾನಗಳು ಯಾವುವು?
👉 ಕೆನರಾ ಪ್ರಾಂತ್ಯದ ಸುಳ್ಯ, ಬೆಳ್ಳಾರೆ ಮತ್ತು ಪುತ್ತೂರು

35) ಅಮರಸುಳ್ಯ ಬಂಡಾಯದ ವಿಚಾರದಲ್ಲಿ ಯಾರನ್ನು ಗಲ್ಲಿಗೇರಿಸಲಾಯಿತು?

👉 ಪುಟ್ಟಬಸಪ್ಪ, ಲಕ್ಷ್ಮಪ್ಪ, ಬಂಗರಸ, ಕೆದಂಬಾಡಿರಾಮಯ್ಯ ಗೌಡರು ಮತ್ತು ಗುಡ್ಡೆಮನೆ ಅಪ್ಪಯಗೌಡರು.

36) ಸಶಸ್ತ್ರ ಬಂಡಾಯ ಸುರಪುರ ಈಗ ಯಾವ ಜಿಲ್ಲೆಯಲ್ಲಿದೆ?
👉 ಸುರಪುರ ಈಗಿನ ಯಾದಗಿರಿ ಜಿಲ್ಲೆಯಲ್ಲಿದೆ.

37) 1842ರಲ್ಲಿ ಬ್ರಿಟಿಷರು ಯಾರನ್ನು ಸುರಪುರದ ಪೊಲಿಟಿಕಲ್ ಏಜೆಂಟನನ್ನಾಗಿ ನೇಮಿಸಲಾಯಿತು?

👉 ಮೆಡೋಸ್ ಟೇಲರ್.

38) ಸುರಪುರದ ಸಶಸ್ತ್ರ ಬಂಡಾಯದ ನಾಯಕನಾರು?
👉 ವೆಂಕಟಪ್ಪ ನಾಯಕ

39) ಕರ್ನಾಟಕದ ಚರಿತ್ರೆಯಲ್ಲಿ 1857ರ ಕ್ರಾಂತಿಯ ನಾಯಕನೆಂದೂ ಇತಿಹಾಸಕಾರರು ಯಾರನ್ನು ವರ್ಣಿಸಿದ್ದಾರೆ?
👉 ವೆಂಕಟಪ್ಪ ನಾಯಕ

40) ಕೊಪ್ಪಳದ ಸಶಸ್ತ್ರ ಬಂಡಾಯದ ನಾಯಕನಾರು?
👉 ಕೊಪ್ಪಳದ ಜಮೀನ್ದಾರರಾಗಿದ್ದ  ವೀರಪ್ಪನವರು.

41) ಕೊಪ್ಪಳದ ಜಮೀನ್ದಾರನಾಗಿದ್ದ  ವೀರಪ್ಪನವರು ದಂಗೆ ಏಳಲು ಕಾರಣವೇನು?
👉 ಹೈದರಾಬಾದ್ ನಿಜಾಮನ ದೌರ್ಜನ್ಯ ಆಡಳಿತದಿಂದ ಬೇಸತ್ತು ದಂಗೆ ಏಳಲು ಕಾರಣವಾಯಿತು.

42) ಹಲಗಲಿಯ ಬೇಡರ ದಂಗೆಗೆ ಪ್ರಸಿದ್ದವಾಗಿದ್ದ ಹಲಗಲಿ ಈಗ ಯಾವ ಜಿಲ್ಲೆಯಲ್ಲಿದೆ?
👉 ಬಾಗಲಕೋಟೆ ಜಿಲ್ಲೆ ಮುದೋಳ ತಾಲ್ಲೂಕಿನಲ್ಲಿದೆ

 ಸಾಧನಾ ಅಕಾಡೆಮಿ, ಶಿಕಾರಿಪುರ.

82 ಕಾಮೆಂಟ್‌ಗಳು:

  1. It is a Good shering.& all computetive exams. Manjunath Sir, teaching is very, very good. So please. Fda&sda modal qutions & How to exam preparation.give me,your technical points.

    ಪ್ರತ್ಯುತ್ತರಅಳಿಸಿ
  2. Sir sslc bookali tippu kotta prihara 330 lak ede. But nivu 3 kro kottidira plz tell about it

    ಪ್ರತ್ಯುತ್ತರಅಳಿಸಿ
  3. Super teaching really wonderful,, your all teachers teaching wonderful and Manjunath sir you are excellent teacher and coacher and also giving good service..thank you so much iam the big fan of you.and you are my role model and guru

    ಪ್ರತ್ಯುತ್ತರಅಳಿಸಿ
  4. ನಾನು ನಿಮ್ಮ ಅಸಂಘಟಿತ ವಿಚಾರಗಳ ಸಂಘಟಿತ ವೃಂದಕ್ಕೆ ಆಭಾರಿ ಆಗಿರುವೆ ಗುರುಗಳೇ ~ತುಂಬಾ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  5. It's really helpful to all who are all attending comparative exams, thank you so much sir

    ಪ್ರತ್ಯುತ್ತರಅಳಿಸಿ
  6. ಗುರೂಜೀ ಸಹಕಾರ ಬ್ಯಾಂಕಿಂಗ್ ಬಗ್ಗೆ ಒಂದಿಷ್ಟು ಮಾಹಿತಿ ನೀಡಿ

    ಪ್ರತ್ಯುತ್ತರಅಳಿಸಿ
  7. ನಿಮ್ಮ ಅಕಾಡೆಮಿಯ ದೂರವಾಣಿ ಸಂಖ್ಯೆ ಬೇಕಾಗಿತ್ತು. ಇಲ್ಲಿ ಯಾರಾದ್ರೂ ಹಾಕಿ.

    ಪ್ರತ್ಯುತ್ತರಅಳಿಸಿ
  8. Really very nice teaching and knowledgeable information for compitative.
    Thank so much sir..

    ಪ್ರತ್ಯುತ್ತರಅಳಿಸಿ
  9. Hi manjunath Sir,,,
    Ur teaching is excellent.
    Really fan of u sir..
    Thank you..🇮🇳

    ಪ್ರತ್ಯುತ್ತರಅಳಿಸಿ
  10. Manjunath Sir pls teach physical geography, not understand that one.
    Please...👏

    ಪ್ರತ್ಯುತ್ತರಅಳಿಸಿ
  11. Sir ksrtc ತಾಂತ್ರಿಕ ಸಹಾಯಕ ಹುದ್ದೆಯ ಸಿಲಬಸ್ ನ ಎಲ್ಲ ಟಾಪಿಕ್ಸಾನದರು ಹೇಳಿ ಸರ್ ನಿಮ್ಮ ಪಾದಕ್ಕೆ ಬೀಳುತ್ತೇನೆ ಸಾ

    ಪ್ರತ್ಯುತ್ತರಅಳಿಸಿ
  12. ಸರ್ ಇತಿಹಾಸಕ್ಕೆ ಸಂಬಂದಿಸಿದ ಆಕರ ಗ್ರಂಥಗಳನ್ನು ತಿಳಿಸಿ

    ಪ್ರತ್ಯುತ್ತರಅಳಿಸಿ
  13. ಹೆಲೋ ಸರ್ ನಿಮ್ಮ ಒಂದು ವಿಡಿಯೋ ದಲ್ಲೀ Nios ಇಂದ ಡೈರೆಕ್ಟ್ 12th ಎಕ್ಸಾಮ್ ಬರೆಯಬಹುದು ಅಂಥ ಹೇಳಿದ್ದೀರಿ ಆದ್ರೆ 10 ನೆ ತರಗತಿ ಮಾಡದೆ 12th ಬರೆಯಲು ಆಗೋಲ್ಲ ಅಂಥ nios website nalli description ide ಸ್ವಲ್ಪ clear Madi sir

    ಪ್ರತ್ಯುತ್ತರಅಳಿಸಿ
  14. in ur academy all lecturers are very good, very nicely they are teaching thank u all sir no boring very interesting to watch ur videos

    ಪ್ರತ್ಯುತ್ತರಅಳಿಸಿ
  15. Sir can't you give this in English also.. a kind request please.. ur YouTube and kotumb app is helping everyone a lot. Together this too helping.. please give us in English also.

    ಪ್ರತ್ಯುತ್ತರಅಳಿಸಿ
  16. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  17. Namaste sir, nanna hesaru Sarita. Sir I want to know that presently I am 36years old. My question is sir, whether I can write COMPETATIVE exams now? I am a general category in 3rd B categerry. Now I am very serious about COMPETATIVE exams. So whether I can success in this or not? Kindly guide me sir. Now I am preparing KPSC FDA SDA GROUP C EXAMS through ur sadhana Academy

    YouTube channel.My age category Tumba Jasti Ide sir, (my age is now presently 36years) so practical aagi nange suggestion kodi sir.... I am a private employee sir. I tried someny times in a improper way. But now presently online you tube channels gives more effective information and proper guidance to people.

    So, kindly give suggestions for my COMPETATIVE exams life.

    By covid I lost my private job sir, so presently I am un-eployee . So kindly guide me about my COMPETATIVE exam life validity.

    I am waiting ur valuable, practical guidance sir....


    Thanking you sir....

    ಪ್ರತ್ಯುತ್ತರಅಳಿಸಿ
  18. Sir please invite a candidate from forest department, and give some information related to forest service, and state forest exam sir

    ಪ್ರತ್ಯುತ್ತರಅಳಿಸಿ

Study + Steady + Sadhana = SucceSS Model Test-9 | 28th June from 8am to 8pm | If you are New- Register Now https://play.google.com/store/app...