Study + Steady + Sadhana = SucceSS
👉 ಹೈದರಾಲಿ ಮತ್ತು ಅವನ ಮಗ ಟೀಪ್ಪು ಸುಲ್ತಾನರು
ಸಾಧನಾ ಅಕಾಡೆಮಿ, ಶಿಕಾರಿಪುರ. 9449610920.
ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು:
ಪ್ರಶ್ನೋತ್ತರಗಳು:
1) 1761-1799 ರ ನಡುವಿನ ಕಾಲಘಟ್ಟದಲ್ಲಿ ಕರ್ನಾಟಕವನ್ನು ಆಳಿದವರು ಯಾರು?👉 ಹೈದರಾಲಿ ಮತ್ತು ಅವನ ಮಗ ಟೀಪ್ಪು ಸುಲ್ತಾನರು
2) ಭಾರತದ ಚರಿತ್ರೆಯಲ್ಲಿ ಎಷ್ಟನೇ ಶತಮಾನವನ್ನು ‘ರಾಜಕೀಯ ಸಮಸ್ಯೆಗ¼ ಶತಮಾನ’ ವೆಂದೇ ಚಿತ್ರಿಸಲ್ಪಟ್ಟಿದೆ.
👉 18ನೇ ಶತಮಾನ
3) ಭಾರತದ ಚರಿತ್ರೆಯಲ್ಲಿ 18 ನೇಶತಮಾನ ‘ರಾಜಕೀಯ ಸಮಸ್ಯೆಗಳ ಶತಮಾನ’ ವೆಂದೇ ಚಿತ್ರಿಸಲ್ಪಟ್ಟಿದೆ. ಇದಕ್ಕೆ ಅನೇಕ ಕಾರಣವೇನು?
👉 ಮೊಘಲ್ಚಕ್ರವರ್ತಿ ಔರಂಗಜೇಬ್ನ ಮರಣ (1707)
👉 ಮೈಸೂರು ರಾಜ್ಯದ ಚಿಕ್ಕದೇವರಾಜ ಒಡೆಯರ ಮರಣ (1704)
4) ಹೈದರಾಲಿಯು ಹೇಗೆ ಅಧಿಕಾರಕ್ಕೆ ಬಂದನು?
👉ಇವನು ಒಬ್ಬ ಸಾಮಾನ್ಯ ಸೈನಿಕನಾಗಿ ಮೈಸೂರು ರಾಜ್ಯದ ಸೇವೆಗೆ ಸೇರಿದ ವ್ಯಕ್ತಿ ತನ್ನ ಚಾಣಾಕ್ಷ ರಾಜಕೀಯ ನಡೆಗೆ ಹೆಸರಾಗಿದ್ದನು.
👉ಮೈಸೂರಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇವನು ದೇವನಹಳ್ಳಿ ಮುತ್ತಿಗೆ ಸಂದರ್ಭ ಮತ್ತು ಅರ್ಕಾಟಿನ ನಿಜಾಮನ ವಿಷಯಕ್ಕೆ ಸಂಬಂಧಿಸಿದ ಸೈನಿಕ ಕಾರ್ಯಾಚರಣೆಯಲ್ಲಿ ಪ್ರವರ್ಧಮಾನಕ್ಕೆ ಬಂದನು.
👉ಮೈಸೂರಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇವನು ದೇವನಹಳ್ಳಿ ಮುತ್ತಿಗೆ ಸಂದರ್ಭ ಮತ್ತು ಅರ್ಕಾಟಿನ ನಿಜಾಮನ ವಿಷಯಕ್ಕೆ ಸಂಬಂಧಿಸಿದ ಸೈನಿಕ ಕಾರ್ಯಾಚರಣೆಯಲ್ಲಿ ಪ್ರವರ್ಧಮಾನಕ್ಕೆ ಬಂದನು.
5) ಮೊದಲನೇ ಆಂಗ್ಲೋ ಮೈಸೂರು ಯುದ್ದವು 1767-69 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
👉 ಮದ್ರಾಸ್ -1769
6) ಎರಡನೇ ಆಂಗ್ಲೋ ಮೈಸೂರು ಯುದ್ದವು 1780- 1784 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
👉 ಮಂಗಳೂರು - 1784
7) ಎರಡನೇ ಆಂಗ್ಲೋ ಮೈಸೂರು ಯುದ್ದ 1780-84 ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
👉 ವಾರನ್ ಹೆಸ್ಟಿಂಗ್ಸ್
👉 ವಾರನ್ ಹೆಸ್ಟಿಂಗ್ಸ್
8) ಎರಡನೇ ಆಂಗ್ಲೋ ಮೈಸೂರು ಯುದ್ದ 1780-84 ಸಮಯದಲ್ಲಿದ್ದ ಬ್ರಿಟಿಷ್ ಸೇನೆಯ ಸೇನಾನಾಯಕ ಯಾರು?
👉 ಐರ್ಕೂಟ್
9) ಯಾವ ಯುದ್ದದ ನಂತರ ಹೈದರಾಲಿ ಮರಣ ಹೊಂದಿದನು?
👉1782 ರಲ್ಲಿ ಪುಲಿಕಾಟ್ ಮತ್ತು ಸೋಲಿಂಗೂರ್ಗಳ ಕದನದ ನಂತರ ಮರಣ ಹೊಂದಿದನು.
10) ಮೂರನೇ ಆಂಗ್ಲೋ ಮೈಸೂರು ಯುದ್ದಕ್ಕೆ ಮುಖ್ಯ ಕಾರಣವೇನು?
👉ತಿರುವಾಂಕೂರು ರಾಜ್ಯದ ರಾಜ ನೆರೆಯ ಕೊಚ್ಚಿ ಸಂಸ್ಥಾನದಲ್ಲಿ ಬ್ರಿಟಿಷರ ಬೆಂಬಲದಿಂದ ಕೋಟೆಯನ್ನು ನಿರ್ಮಿಸಿದನು ಮತ್ತು
👉ಆತನು ಡಚ್ಚರಿಂದ ಆಯಕೋಟಾ ಮತ್ತು ಕಾಂಗನೂರು ಕೋಟೆಗಳನ್ನು ಪಡೆದುಕೊಂಡಿದ್ದನು.
👉ಇದು ಮಂಗಳೂರು ಒಪ್ಪಂದದ ಷರತ್ತುಗಳ ಉಲ್ಲಂಘನೆಯಾಗಿತ್ತು.
11) ಮೂರನೆ ಆಂಗ್ಲೋ ಮೈಸೂರು ಯುದ್ದ ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
👉 ಲಾರ್ಡ ಕಾರನ್ವಾಲೀಸ್
12) ಮೂರನೆ ಆಂಗ್ಲೋ ಮೈಸೂರು ಯುದ್ದವು 1790-1792 ಯಾವ ಒಪ್ಪಂದದೊಂದಿಗೆ ಕೊನೆಯಾಯಿತು?
👉ಶ್ರೀರಂಗಪಟ್ಟಣ - 1792
13) ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳೇನು?
👉ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬಿಟ್ಟುಕೊಡುವುದು
👉ಮೂರು ಕೋಟಿ ರೂಪಾಯಿಗಳನ್ನು ಯುದ್ಧನಷ್ಟ ಭರ್ತಿಯಾಗಿ ಕೊಡುವುದು,
👉ಯುದ್ಧನಷ್ಟ ಭರ್ತಿಗೆ ಗ್ಯಾರಂಟಿಯಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ಒತ್ತೆಯಾಗಿ ನೀಡುವುದು,
👉ಯುದ್ಧದ ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದ್ದ ಸೈನಿಕರನ್ನು ಬಿಡುಗಡೆಗೊಳಿಸುವುದು.
14) ನಾಲ್ಕನೆ ಆಂಗ್ಲೋ ಮೈಸೂರು ಯುದ್ದ ಸಮಯದಲ್ಲಿದ್ದ ಗೌರ್ನರ್ ಜನರಲ್ ಯಾರು?
👉ಲಾರ್ಡ ವೆಲ್ಲೆಸ್ಲಿ
15) ಟಿಪ್ಪು ಸುಲ್ತಾನ್ ಮರಣ ಹೊಂದಿದ ವರ್ಷ?
👉1799
16) ಟಿಪ್ಪು ಮರಣದ ನಂತರ ಮೈಸೂರನ್ನು ಯಾರಿಗೆ ಹಸ್ತಾಂತರಿಸಲಾಯಿತು?
👉3ನೇ ಕೃಷ್ಣರಾಜ ಒಡೆಯರ್
17) ಕರ್ನಾಟಕದ ಪ್ರಮುಖ ಸಶಸ್ತ್ರ ಬಂಡಾಯಗಳು ಯಾವುವು?
👉ದೋಂಡಿಯಾ ವಾಘ್ (1800)
👉ಕಿತ್ತೂರಿನ ಬಂಡಾಯ - ವೀರರಾಣಿ ಚೆನ್ನಮ್ಮ (1824)
👉ಸಂಗೊಳ್ಳಿ ರಾಯಣ್ಣ (1829-30)
👉ಅಮರ ಸುಳ್ಯ ಬಂಡಾಯ
👉ಸುರಪುರ ಮತ್ತು ಕೊಪ್ಪಳ ಬಂಡಾಯ
👉ಹಲಗಲಿಯ ಬೇಡರ ದಂಗೆ
18) ದೋಂಡಿಯಾ ವಾಘ್ ಎಲ್ಲಿ ಜನಿಸಿದನು?
👉ದೋಂಡಿಯಾ ಚನ್ನಗಿರಿಯ ಮರಾಠ ಕುಟುಂಬದಲ್ಲಿ ಜನಿಸಿದನು.
19) ದೋಂಡಿಯಾ ವಾಘ್ ದಂಗೆಯನ್ನು ನಿಯಂತ್ರಸಿದ ಗೌರ್ನರ್ ಜನರಲ್ ಯಾರು?
👉ಲಾರ್ಡ್ ವೆಲ್ಲೆಸ್ಲಿ
20) ದೋಂಡಿಯಾ ವಾಘ್ ಹತ್ಯೆಗೈದ ಸ್ಥಳ?
👉ಕೋನ್ಗಲ್
21) ಕಿತ್ತೂರಿನ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ದ ಹೋರಾಡಲು ಕಾರಣವೇನು?
👉ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ವಿರೋಧಿಸಿ
22) ಕಿತ್ತೂರಿನ ರಾಣಿ ಚೆನ್ನಮ್ಮ ದತ್ತು ಪಡೆದ ಮಗನ ಹೆಸರೇನು?
👉ಶಿವಲಿಂಗಪ್ಪ
23) ಕಿತ್ತೂರಿನ ಬಂಡಾಯದ ಸಮಯದಲ್ಲಿದ್ದ ಧಾರವಾಡದ ಕಲೆಕ್ಟರ್ ಮತ್ತು ಪೊಲಿಟಿಕಲ್ ಏಜೆಂಟನಾಗಿದ್ದನು ಯಾರು?
👉 ಥ್ಯಾಕರೆ
24) ಕಿತ್ತೂರಿನ ರಾಣಿ ಚೆನ್ನಮ್ಮನನ್ನು ಎಲ್ಲಿ ಬಂಧಿಸಿ ಇಡಲಾಗಿತ್ತು?
👉 ಬೈಲಹೊಂಗಲ ಕೋಟೆ
25) ಕಿತ್ತೂರು ರಾಣಿ ಚೆನ್ನಮ್ಮ__ಎಂಬ ಹುಡುಗನನ್ನು ದತ್ತು ಪಡೆದಿದ್ದಳು.
👉 ಶಿವಲಿಂಗಪ್ಪ
26) ಕಿತ್ತೂರಿಗೆ ಮುತ್ತಿಗೆ ಹಾಕಿದ್ದ ಬ್ರಿಟಿಷ್ ಸೈನ್ಯದ ನಾಯಕ ಅಥವಾ ಲೆಫ್ಟಿನೆಂಟ್ ಯಾರು?
👉 ಲೆಫ್ಟಿನೆಂಟ್ ಕರ್ನಲ್ ಡೀಕ್
27) ಕಿತ್ತೂರಿನ ರಾಜ್ಯಾಡಳಿತದ ವಿಚಾರದಲ್ಲಿ ಥಾಮಸ್ ಮನ್ರೋವಿನ ಪಾತ್ರವೇನು?
👉 ಶಿವಲಿಂಗರುದ್ರಸರ್ಜ ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯವನ್ನು ನೀಡಿದ್ದನು.
👉 ಇದರಿಂದಾಗಿ ಬ್ರಿಟಿಷರು ಆ ಸಂಸ್ಥಾನವನ್ನು ವಂಶಪಾರಂಪರ್ಯವಾಗಿ ಆತನಿಗೆ ನೀಡಿದ್ದು ಪ್ರತಿಯಾಗಿ ವಾರ್ಷಿಕ ಕಾಣಿಕೆಯನ್ನು ಪಡೆದುಕೊಳ್ಳುವಂತಾಯಿತು.
👉ಈ ಒಪ್ಪಂದ ಥಾಮಸ್ ಮನ್ರೋನ ಕಾಲದಲ್ಲಿ ಜಾರಿಗೊಳಿಸಲ್ಪಟ್ಟಿತು.
28) ಸಂಗೊಳ್ಳಿ ರಾಯಣ್ಣ ಯಾರು?
👉 ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿದ್ದ ವೀರಯೋದ ಕಿತ್ತೂರು ಸಂಸ್ಥಾನದ ಸೈನಿಕ
29) ರಾಯಣ್ಣನನ್ನು ಬಂಧಿಸಲು ಬ್ರಿಟಿಷರು ರೂಪಿಸಿದ ಸಂಚು ಏನು?
👉 ಕಿತ್ತೂರಿನ ಚೆನ್ನಮ್ಮಳನ್ನು ವಿರೋಧಿಸುತ್ತಿದ್ದ ದೇಸಾಯಿಗಳನ್ನು ಪ್ರಚೋದಿಸಿದರು.
👉 ಅಮಲ್ದಾರನಾಗಿದ್ದ ಕೃಷ್ಣರಾಯ ಎಂಬುವವನು ಈ ಸಂಚಿಗೆ ಕೈ ಜೋಡಿಸಿದನು.
👉 ಸಂಚಿಗೆ ಬಲಿಯಾದ ರಾಯಣ್ಣನನ್ನು ಇಂಗ್ಲಿಷ್ ಸೈನ್ಯ ಬಂಧಿಸಿ ಧಾರವಾಡಕ್ಕೆ ತಂದಿತು.
30) ಸಂಗೊಳ್ಳಿ ರಾಯಣ್ಣನನ್ನು ಎಲ್ಲಿ ಗಲ್ಲಿಗೇರಿಸಲಾಯಿತು?
👉 1831ರಲ್ಲಿ ನಂದಗಡದಲ್ಲಿ ರಾಯಣ್ಣನ್ನು ಗಲ್ಲಿಗೇರಿಸಲಾಯಿತು.
31) ಅಮರ ಸುಳ್ಯ ಬಂಡಾಯ ಇದು ಮೂಲತಃ ಎಂತಹ ಮಾದರಿಯ ಬಂಡಾಯ?
👉 ಇದು ಮೂಲತಃ ರೈತ ಬಂಡಾಯ
32) ಅಮರ ಸುಳ್ಯ ಬಂಡಾಯವನ್ನು ಸಂಘಟಿಸಿದವರು ಯಾರು?
👉 ಕೊಡಗಿನಲ್ಲಿ ಸ್ವಾಮಿಅಪರಾಂಪರ, ಕಲ್ಯಾಣಸ್ವಾಮಿ ಮತ್ತು ಪುಟ್ಟಬಸಪ್ಪ ಸಶಸ್ತ್ರ ಬಂಡಾಯವನ್ನು ಸಂಘಟಿಸಿದರು.
33) ಕೊಡಗನ್ನು ಆಳಿದ ಕೊನೆಯ ಅರಸ ಯಾರು?
👉 ಹಾಲೇರಿ ರಾಜವಂಶದ ಚಿಕ್ಕವೀರರಾಜೇಂದ್ರ
34) ‘ಅಮರ ಸುಳ್ಯ’ ಬಂಡಾಯದ ಕೇಂದ್ರ ಸ್ಥಾನಗಳು ಯಾವುವು?
👉 ಕೆನರಾ ಪ್ರಾಂತ್ಯದ ಸುಳ್ಯ, ಬೆಳ್ಳಾರೆ ಮತ್ತು ಪುತ್ತೂರು
35) ಅಮರಸುಳ್ಯ ಬಂಡಾಯದ ವಿಚಾರದಲ್ಲಿ ಯಾರನ್ನು ಗಲ್ಲಿಗೇರಿಸಲಾಯಿತು?
👉 ಪುಟ್ಟಬಸಪ್ಪ, ಲಕ್ಷ್ಮಪ್ಪ, ಬಂಗರಸ, ಕೆದಂಬಾಡಿರಾಮಯ್ಯ ಗೌಡರು ಮತ್ತು ಗುಡ್ಡೆಮನೆ ಅಪ್ಪಯಗೌಡರು.
36) ಸಶಸ್ತ್ರ ಬಂಡಾಯ ಸುರಪುರ ಈಗ ಯಾವ ಜಿಲ್ಲೆಯಲ್ಲಿದೆ?
👉 ಸುರಪುರ ಈಗಿನ ಯಾದಗಿರಿ ಜಿಲ್ಲೆಯಲ್ಲಿದೆ.
37) 1842ರಲ್ಲಿ ಬ್ರಿಟಿಷರು ಯಾರನ್ನು ಸುರಪುರದ ಪೊಲಿಟಿಕಲ್ ಏಜೆಂಟನನ್ನಾಗಿ ನೇಮಿಸಲಾಯಿತು?
👉 ಮೆಡೋಸ್ ಟೇಲರ್.
38) ಸುರಪುರದ ಸಶಸ್ತ್ರ ಬಂಡಾಯದ ನಾಯಕನಾರು?
👉 ವೆಂಕಟಪ್ಪ ನಾಯಕ
39) ಕರ್ನಾಟಕದ ಚರಿತ್ರೆಯಲ್ಲಿ 1857ರ ಕ್ರಾಂತಿಯ ನಾಯಕನೆಂದೂ ಇತಿಹಾಸಕಾರರು ಯಾರನ್ನು ವರ್ಣಿಸಿದ್ದಾರೆ?
👉 ವೆಂಕಟಪ್ಪ ನಾಯಕ
40) ಕೊಪ್ಪಳದ ಸಶಸ್ತ್ರ ಬಂಡಾಯದ ನಾಯಕನಾರು?
👉 ಕೊಪ್ಪಳದ ಜಮೀನ್ದಾರರಾಗಿದ್ದ ವೀರಪ್ಪನವರು.
41) ಕೊಪ್ಪಳದ ಜಮೀನ್ದಾರನಾಗಿದ್ದ ವೀರಪ್ಪನವರು ದಂಗೆ ಏಳಲು ಕಾರಣವೇನು?
👉 ಹೈದರಾಬಾದ್ ನಿಜಾಮನ ದೌರ್ಜನ್ಯ ಆಡಳಿತದಿಂದ ಬೇಸತ್ತು ದಂಗೆ ಏಳಲು ಕಾರಣವಾಯಿತು.
42) ಹಲಗಲಿಯ ಬೇಡರ ದಂಗೆಗೆ ಪ್ರಸಿದ್ದವಾಗಿದ್ದ ಹಲಗಲಿ ಈಗ ಯಾವ ಜಿಲ್ಲೆಯಲ್ಲಿದೆ?
👉 ಬಾಗಲಕೋಟೆ ಜಿಲ್ಲೆ ಮುದೋಳ ತಾಲ್ಲೂಕಿನಲ್ಲಿದೆ